Tuesday 25 October 2011

ದೇವರ ಆಟ

ಪ್ರಿಯ ಸ್ನೇಹಿತರೇ

ಈ ಜಗತ್ತಿನ ಬೆಲೆಯೇ ಕಟ್ಟಲು ಆಗದೆ ಇರುವುದು ಅಂದರೆ ಅದು ಪ್ರೀತಿ ಮಾತ್ರ ಅನಿಸುತ್ತೆ ಯಾಕೆಂದ್ರೆ ಪ್ರೀತಿ ಪ್ರತಿಯೊಬ್ಬ ಭಾವಜೀವಿಗಳ ಉಸಿರು...

ಪ್ರೀತಿಗೆ ಜಗತ್ತನ್ನ ಗೆಲ್ಲೋ ಶಕ್ತಿಯಿದೆ ಅಂತಾರೆ ಆದರೆ ಈ ಜಗತ್ತಲ್ಲಿ ಪ್ರತಿಯೊಬ್ಬರ ಬಾಳಲ್ಲೂ ಪ್ರೀತಿ ವಿಷಯದಲ್ಲಿ ಸೋಲನ್ನ ಕಂಡವರೆ ಜಾಸ್ತಿ ಎನ್ನಬಹುದು..

ಪ್ರೀತಿ ಮತ್ತು ಸಾವು ಇವೆರೆಡು ಹೇಳದೆ ಕೇಳದೇ ಕೊಡುವ ಭಗವಂತನ ಕಾಣಿಕೆ
ಹೌದು, ಗೆಳೆಯರೇ ನನ್ನ ಈಗಿನ ಪ್ರಯತ್ನ ಪ್ರೀತಿ ಮತ್ತು ಸಾವು ....

ಸಾವಲ್ಲಿ ಬೇಕಾದರೆ ಯಾರಾದರು ತಲೆ ತೂರಿಸಬವುದು ಆದರೆ ಪ್ರೀತಿ ವಿಷಯದಲ್ಲಿ ಆಗಲ್ಲ



ನಾವಾಗಲಿ ನೀವಾಗಲಿ
ಗೆಳೆಯರಾಗಲಿ ಬಳಗವಾಗಲಿ
ಗುರುಗಳಾಗಲಿ ಋಷಿಗಳಾಗಲಿ
ದೇವರಾಗಲಿ ದಿಂಡರಾಗಲಿ
ತಲೆ ತೂರಿಸೋ ಹಾಗಿಲ್ಲ


ಈ ಸಾಲಿನ ಅರ್ಥ ಹುಡುಕುತ್ತ ಹೊರಟ ನನಗೆ ಸಿಕ್ಕಿದು ಒಂದೇ ಉತ್ತರ ಅದೇನಂತ ಈ ಕತೆ ಓದಿದ ನಂತರ ನಿಮಗೆ ತಿಳಿಯುತ್ತದೆ....

ಕೇವಲ ಒಂದು ತಿಂಗಳು ಹಿಂದೆ ನಾನು ಕಂಡ ಒಂದು ಸತ್ಯ ಕತೆ ಆಗು ಸ್ವಲ್ಪ ಕಾಲ್ಪನಿಕ ಹಾಗಂತ ಇದರಲ್ಲಿ ಯಾವುದು ಸತ್ಯ, ಯಾವುದು ಕಲ್ಪನೆ ಅಂತ ಕೇಳೋಕ್ ಹೋಗ್ಬೇಡಿ ಅದು ಆರೋಗ್ಯಕ್ಕೆ ಒಳ್ಳೇದಲ್ಲ ...

ನಮ್ಮ ಬೆಂಗಳೂರಿನಲ್ಲಿ ಪ್ರೇಮಿಗಳಿಗೆ ಏನು ಕಡಿಮೆ ಇಲ್ಲ ಪ್ರೇಮಿಗಳು ತುಂಬ ಜನ ಸಿಗ್ತಾರೆ ಆದರೆ ಪ್ರೀತಿ ನ ಉಳಿಸಿಕೊಳ್ಳೋರು ೧೦೦ ರಲ್ಲಿ ೫ ಜನ ಮಾತ್ರ ಆ ೫ ಜನರಲಿ ನೆಮ್ಮದಿಯಾಗಿ  ಬಾಳೋವ್ರು ಒಬ್ರು  ಮಾತ್ರ  ಸಿಗ್ತಾರೆ  ಹಾಗೆ  ಪ್ರೀತಿ ಗಾಗಿ  ಸಾವಿಗೆ ಶರಣು ಅಗೊವ್ರು ಜಾಸ್ತಿನೇ ಇದ್ದಾರೆ.  "ನಾನು ಹೇಗೆ ಇದ್ದರು ನಾನು ಪ್ರೀತಿಸಿದವರು ಚನ್ನಾಗಿ ಬಾಳಲಿ" ಅಂತ ಹೇಳುವವರು ಕಡಿಮೆನೆ ಹಾಗೆ ಈ ನನ್ನ ಕಥಾ ನಾಯಕನು ಕೂಡ ಒಬ್ಬ....

ಸುಳ್ಳು ಮೋಸ ಮಾಡಿ ಪ್ರೀತಿಸಿ ಆದರೆ ಪ್ರೀತಿಸಿ ಸುಳ್ಳು ಹೇಳಿ ದೂರ ಆಗೋದು ಸರಿ ಅಲ್ಲ ಆದರೆ ನನ್ನ ಕಥಾ ನಾಯಕ ಮಾಡಿದ್ದೂ ಸರಿನೋ ತಪ್ಪೋ ನನಗೆ ಈಗಲು ಗೊತ್ತಾಗ್ತಾ ಇಲ್ಲ ಇದಕ್ಕೆ ನೀವೇ ಉತ್ತರ ಕೊಡಬೇಕು ಗೆಳೆಯರೇ.....


ಪ್ರೀತಿಯ ಭಾವನೆಗಳೇ ನನ್ನ ಲೋಕ ನನಗೆ ಬೇರೆ ಯಾವ ಲೋಕವೇ ಇಲ್ಲ ಅಂತ ಜೀವನ ಸಾಗಿಸುತಿದ್ದ ಕಥಾ ನಾಯಕನ ಹೆಸರು ವಿನೋದ್ ( ವಿನು ) ಅವನ ಪೆಟ್ ನೇಮ್ . ಅಮ್ಮ ನ ಮುದ್ದು ಮಗನಾಗಿ ಬೆಳೆದ ವಿನು ಸ್ವಲ್ಪ ಸೋಂಬೇರಿ ಈಗ ಒಂದು ಚಿಕ್ಕ company ಯಲ್ಲಿ ಕಾರ್ಯನಿರ್ವಹಿಸುತಿದ್ದಾನೆ.

ಚಿಕ್ಕವನಿಂದ ಬರೀ ಕನಸುಗಳನ್ನೇ ಕಾಣುತಿದ್ದ ಇವನು ಆ ಕನಸನ್ನ ನನಸು ಮಾಡಲು ಪ್ರಯತ್ನವೇ ಪಡುತಿರಲಿಲ್ಲ ಆದರೆ ಪ್ರೀತಿ ವಿಷ್ಯ ದಲ್ಲಿ ಮಾತ್ರ ತುಂಬ ಕನಸುಗಳನ್ನ ಕಂಡ ವಿನುವಿಗೆ ಅವನು ಕನಸು ಕಂಡ ಹಾಗೆ ಅವನಿಗೆ ನಿಜವಾದ ಪ್ರೀತಿ ಸಿಕ್ಕಿತು.        ಹ ಪ್ರೀತಿಯ ಹೆಸರು ' ಸೌಮ್ಯ '

ಸೌಮ್ಯ ? ನನ್ನ ಕಥಾ ನಾಯಕಿ
ನಿಜ ಹೇಳಬೇಕು ಎಂದರೆ ಸೌಮ್ಯ ಬೆಂಕಿಯಲ್ಲಿ ಅರಳಿದ ಹೂ. ಸೌಮ್ಯ ಗೆ ಅಪ್ಪ ನ ಪ್ರೀತಿ ಸಿಗದೇ ಚಿಕ್ಕವಳಿಂದ ಅಜ್ಜಿಯಾ ನೆರಳಲಿನಲಿ ಬೆಳೆದ ಹುಡುಗಿ...

ಸೌಮ್ಯ ಳಿಗೆ ತಿಳಿದಿದ್ದು ಒಂದೇ ಅದು ಸ್ನೇಹ . ಎಲ್ಲರ ಜೊತೆಯಲ್ಲೂ ಸ್ನೇಹ ವಿಶ್ವಾಸ ದಿಂದ ಇದ್ದ ಸೌಮ್ಯಳಿಗೆ ಮುಂದೆ ಜೀವನದಲ್ಲಿ ಅದೇ ಮುಳ್ಳಾಗಿ ನಿಲ್ಲುತೆ


ಸೌಮ್ಯ ಮತ್ತು ವಿನು ಕಳೆದ ಎರೆಡು ವರ್ಷಗಳಿಂದ ಮನಸಾರೆ ಪ್ರೀತಿಸ್ತಾ ಇರ್ತಾರೆ. ವಿನು ನಾನು ಕಂಡಂತೆ ನನಗೆ ನನ್ನ ಪ್ರೀತಿ ಮಾಡುವ ಒಂದು ಜೀವ ಇದೆ ಎನ್ನುತ್ತಾ ಚಿಕ್ಕವಳಿಂದ ನೋವಿನಲ್ಲೇ ಬೆಳೆದು ಬಂದ ಸೌಮ್ಯ ಳಿಗೆ ವಿನು ಪ್ರತಿ ದಿನ ನಗು ವೆಂಬ ಸಂತೋಷ ಕೊಡುತಿದ್ದ.....

ಇತ್ತ ಸೌಮ್ಯ ನನ್ನ ಕಣ್ಣಿರು ಒರೆಸಲು ಅ ದೇವರೇ ಕಳಿಸಿರಬೇಕು ಎನ್ನುತ ಮನಸಿನಲೇ ವಿನು ಗೆ ಗುಡಿ ಕಟ್ಟಿ ಪ್ರತಿ ದಿನ ಪುಜಿಸುತ್ತ ತನ್ನ ಪ್ರೀತಿ ಯನ್ನ ಎದೆ ಗುಡಿನಲ್ಲಿ ಬಚ್ಚಿಟ್ಟಿದ್ದಳು. 

ನನಗೆ ನೀನು ನಿನಗೆ ನಾನು ಮನಸಿಗೆ ನೋವಾದಾಗ ನಿನ್ನ ಮಡಿಲಲ್ಲಿ ಮಗುವಿನಂತೆ ಮಲ್ಕೋ ಬೇಕು ಅನ್ನುವ ಹುಡುಗ
ಸ್ನೇಹಿತರನ್ನು ದೂರ ಮಡಿ ನನಗೆ ನಿನ್ನ ಹೊರತು ಬೇರೆ ಯಾರು ಬೇಕಿಲ್ಲ ನೀನೆ ನನ್ನ ಭಾಳ ದೈವ ಎನ್ನುವ ಮುಗ್ದ ಮನಸಿನ ಹುಡುಗಿ ಇವರಿಬ್ಬರ ಪ್ರೇಮ ತರ್ಕಕ್ಕೆ ನಿಲುಕದ್ದು ಎನ್ನಬಹುದು.

ಒಂದು ಕ್ಷಣ ಸೌಮ್ಯ ಳ ಕಣ್ಣಿಂದ ವಿನು ಮರೆಯಾಗುವುದನ್ನು ಕನಸಿನಲ್ಲಿ ಕಂಡರೂ ಬೆಚ್ಚಿ ಬಿಳುತಿದ್ದ ಹುಡುಗಿ ಸೌಮ್ಯ
ತನ್ನ ಪ್ರೀತಿಗೆ ಎಲ್ಲಿ ನನ್ನ ಸ್ನೇಹಿತರು ಮುಳ್ಳಾಗುತ್ತಾರೋ ಎಂದು ತನ್ನೆಲ್ಲ ಸ್ನೇಹ ವನ್ನು ದೂರ ಮಾಡಿ ಅವರೆಲ್ಲರ ದೃಷ್ಟಿಯಲಿ ಕೆಟ್ಟವಳಾಗಿ ವಿನುವಿನ ಪ್ರೀತಿ ಗಾಗಿ ಆ ದೇವರ ಬಳಿ ದಿನ ಕೇಳುತಿದ್ದ ಹುಡುಗಿ ಸೌಮ್ಯ

ಜೀವನದಲ್ಲಿ ಗುರಿಯೇ ಇಲ್ಲದೆ ಬೆಳೆದೆ ವಿನೋದ್ ಬಾಳಿಗೆ ದಾರಿ ದೀಪ ವಾಗಿ ಆತ್ಮಸ್ಠ್ಯರ್ಯ ತುಂಬಿ ಪ್ರೇಮಿ ಆಗಿ ವಿನೋದ್ ಬಾಳಿನಲ್ಲಿ ಗುರಿ ಎಂಬುವ ದಾರಿಯನ್ನು ತೋರಿದ ಹುಡುಗಿ ಸೌಮ್ಯ. 

ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಸೌಮ್ಯ ವಿನುವಿನ ಪಾಲಿಗೆ ತಾಯಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ ಭಾವನೆಗಳಿಗೆ ಬೆಲೆ ಕೊಟ್ಟು ವಿನೋದ್ ಬಾಳಿಗೆ ಬೆಳಕಾಗಿ ನಿಂತವಳು ನಮ್ಮ ಈ ಮುಗ್ದ ಮನಸಿನ ಹುಡುಗಿ.

ವಿದಿ ಎಲ್ಲರ ಬಾಳಿನಲ್ಲೂ ಆಟ ಅಡಲೇ ಬೇಕು ಎಂಬುದು ಭಗವಂತ ನ ಇಚ್ಛೆ ಅನಿಸುತ್ತೆ.... ದಿನಗಳು ಕಳೆದಂತೆ ಇವರ ಪ್ರೇಮದಲ್ಲೂ ಕೂಡ ಆ ಕ್ರೂರ ವಿಧಿ ಆಟ ಆಡಿಯೇ ಬಿಟ್ಟಿತು.

ಕೆಲವು ದಿನಗಳ ನಂತರ ವಿನು ಕಚೇರಿಯಲ್ಲೇ ಕೆಲಸ ಮಾಡುತಿದ್ದ ಲಕ್ಷ್ಮೀ ಎಂಬುವ ಹುಡುಗಿ ಜೊತೆ ಸಲಿಗೆಯಿಂದ ಇದ್ದ ವಿನೋದ್ ಬೇರೆಯರ ಕಣ್ಣಿಗೆ ಅದು ಪ್ರೀತಿ ರೂಪ ದಲ್ಲಿ ಕಾಣಿಸುತ್ತದೆ. ಇದನ್ನು ಗಮನಿಸಿದ ಸೌಮ್ಯ ನನ್ನ ದೇವರು ನನಗೆ ಮೋಸ ಮಾಡುವುದಿಲ್ಲ ಎಂಬುವ ನಂಬಿಕೆಯೇ ಮೇಲೆ ಇರುತ್ತಾಲೆ ಹೀಗೆ ದಿನಗಳು ಕಳೆದಂತೆ ವಿನು ಮತ್ತು ಲಕ್ಷ್ಮೀಯ ಸ್ನೇಹ ಮುಂದುವರೆಯುತಿರುದನ್ನು ನೋಡಿ ಸೌಮ್ಯ ಮನದಲ್ಲೂ ಗೊಂದಲ ಶುರುವಾಗುತ್ತದೆ. ಒಂದು ದಿನ ಸೌಮ್ಯ
ವಿನೋದ್ ಬಳಿ ಬಂದು ವಿನು ಪುಟ್ಟ ದಯವಿಟ್ಟು ನಮ್ಮಿಬ್ಬರ ನಡುವೆ ಯಾರೂ ಬರಲು ದಾರಿ ಮಾಡಿ ಕೊಡಬೇಡ ನನಗೆ ಭಯ ಆಗ್ತಿದೆ ಕಣೋ ವಿನು ನಿಜವಾಗಿಯೂ ನಾ ಇಷ್ಟು ದಿನ ನಮ್ಮಿಬ್ಬರ ಬಗ್ಗೆ ಕಂಡಿದ್ದ ಕನಸು ನಿಜವಾಗದಿದ್ದರೆ ಕಂಡಿತ ನಾನು ಉಸಿರು ಆಡಲಾರೆ ಎಂದು ವಿನುವಿನ ಕಾಲಿಗೆ ಬಿದ್ದು ಕೇಳುತ್ತಾಳೆ

ಮುಗ್ದ ಮನಸಿನ ಭಾವನೆ ಯನ್ನು ಅರಿಯದ ವಿನೋದ್ ತನ್ನ ಕಟುಕ ಮನಸಿಂದ ನೀನು ಯಾವ ರೀತಿ ನಿನ್ನ ಗೆಳೆಯರ ಜೊತೆ ಇದ್ದೀಯೋ ನಾನು ಹಾಗೆ ಇದ್ದೀನಿ... ಇದರಲ್ಲಿ ತಪ್ಪೇನಿದೆ ಎಂದು ಕ್ರೂರವಾಗಿ ನುಡಿಯುತ್ತಾನೆ.

ದೇವರು ಎಂದು ಎದೆಯಲ್ಲಿ ಗುಡಿ ಕಟ್ಟಿ ಪೂಜಿಸುತಿದ್ದ ವಿನೋದ್ ಮಾತನ್ನು ಕೇಳಿ ಸೌಮ್ಯ ಒಂದು ಕ್ಷಣ ಮಾತನಾಡದೆ ಮೌನವಾಗಿ ಕುಸಿದುಬಿಡುತ್ತಾಳೆ.
ಸೌಮ್ಯ ಳ ಕಣ್ಣಿಂದ ಕಣ್ಣೀರು ತಾನಾಗಿಯೇ ಕೆನ್ನೆಯನ್ನು ಸ್ಪರ್ಶಿಸುತ್ತದೆ

ಮನಸೇ ಇಲ್ಲವನಂತೆ ಇದ್ದ ವಿನೋದ್ ಸೌಮ್ಯ ಳ ಕನ್ನೀರಿಗೆ ಬೆಲೆ ಕೊಡದೆ "ನಿನಗೆ ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ನಿನ್ನ ದಾರಿ ನೀನು ನೋಡಿಕೋ ನಾನು ನನ್ನ ಸ್ನೇಹ ಬಿಡಲಾಗುದಿಲ್ಲ"  ಎಂದು ಕಟುವಾಗಿ ಹೇಳುತ್ತಾನೆ.

ವಿನೋದ್ ಮಾತನ್ನು ಕೇಳಿದ ಸೌಮ್ಯ ಳಿಗೆ ಎದೆಗೆ ಸಿಡಿಲು ಅಪ್ಪಳಿಸಿದಂತೆ ಆಗಿ ಸೌಮ್ಯ ಕಣ್ಣಿರು ತಾನಾಗಿಯೇ ನಿಲ್ಲುತ್ತದೆ. ವಿನೋದ್ ಮಾತು ಕೇಳಿ
ಸೌಮ್ಯ ಮುಕ ಹಕ್ಕಿ ಯಾಗಿ ನಿಂತು "ವಿನು ಯಾರೇ ನನ್ನ ಬಗ್ಗೆ ಏನೇ ಹೇಳಿದರೂ ನನಗೆ ಏನು ಆಗುತಿರಲಿಲ ಆದರೆ ನನ್ನ ದೇವರು ನೀನು... ನೀನೆ
ನನ್ನ ನು ದೂರ ಮಾಡಿದ ಮೇಲೆ ನಾನು ಬದುಕಿದ್ದರು ವ್ಯೆರ್ಥ" ಎಂದು ಹೇಳಿ ಸೌಮ್ಯ ಕಣ್ಣಿನಲ್ಲಿ ಕಂಬನಿ ತುಂಬಿ ಕೊಂಡು ಪಾರ್ಕ್ ನಿಂದ ಹೊರಡುತ್ತಾಳೆ.
ಎಂದೂ ಕೂಡ ಸೌಮ್ಯಳನ್ನು ಒಂಟಿ ಯಾಗಿ ಬಿಡದ ವಿನೋದ್ ಅಂದು ಸೌಮ್ಯಳನ್ನು ಒಂಟಿ ಮಾಡಿ ಅಸಯಕನಂತೆ ನಿಲ್ಲುತ್ತಾನೆ.

ಸೌಮ್ಯಳಿಗೆ ಅಂದಿನಿಂದ ಪ್ರತಿ ಕ್ಷಣಗಳು ನರಕದಂತಾಗಿ ವಿನೋದ್ ನೆನಪು ಕಾಡುತ್ತಿರುತ್ತದೆ ವಿನು ಮಾತು ಗಳು ಸೌಮ್ಯ ಳ ಮನಸನ್ನು ಬಾಣದಂತೆ ಚುಚ್ಚಿ ಮನಸನ್ನ ಕೊಲ್ಲುತಿರುತ್ತದೆ. ಸೌಮ್ಯ ಉಸಿರು ಅಡುವ ಗೊಂಬೆಯಂತೆ ಅಸಾಯಕಳಂತೆ ಬದುಕುತ್ತಿರುತ್ತಾಳೆ

ಎಲ್ಲ ಎನಿಸಿ ನೋಡಿದರೆ......ಸೌಮ್ಯ ಮತ್ತು ವಿನೋದ್ ಬಾಳಿನಲ್ಲಿ ಬಂದ ಆ ಕರಾಳ ದಿನ ಯಾರ ಜೀವನದಳ್ಳು ಬರಬಾರದು ಅನಿಸುತ್ತೆ.

ಹೌದು ಗೆಳೆಯರೇ ಅಂದು ಶುಭ ಶುಕ್ರವಾರ ವಿನೋದ್ ಗೆ ಸೌಮ್ಯ ಸಿಕ್ಕಿದ ದಿನ ಆದರೆ ಅಂದು ಇಬ್ಬರಿಗೂ black Friday
ಅಂದು ಸೌಮ್ಯ ವಿನೋದ್ ಮೊದಲ ಬಾರಿಗೆ ಬೇಟಿ ಮಾಡಿದ ಜಾಗದಲ್ಲಿ ಕುಳಿತು
ಸೌಮ್ಯ "ವಿನೋದ್ ನಾನು ನಿನ್ನ ಮನಸಾರೆ ಪ್ರೀತಿಸಿದೆ ...   
ನಾನು ಎಂದಿಗೂ ನಿನ್ನ ಸುಖವನ್ನೇ ಬಯಸುವಳು ನೀನು ಎಲ್ಲೇ ಇದ್ದರು ಚೆನ್ನಾಗಿ ಬಾಳು.. 
ನೀನು ನನ್ನ ಬಿಟ್ಟು ನೆಮ್ಮದಿಯಾಗಿ ಇರುವೆ ಎಂದಾದರೆ ನಾನು ನಿನ್ನನು ಬಿಡಲು ಸಿದ್ದ"ಎಂದು ಹೇಳಿ ಕಂಬನಿ ಸುರಿಸುತ್ತ ತನ್ನ ಮನಸಲ್ಲಿ ಜ್ವಾಲಾಮುಕಿ ಯಂತೆ ಇದ್ದ ನೋವನ್ನು ಹೊರಹಾಕಿ ಅಲ್ಲಿಂದ ಹೊರಡುತ್ತಾಳೆ.

ಭವಿಷ್ಯ ದೇವರು ಹಾಕಿದ ಲೆಕ್ಕಾಚಾರದ ಮುಂದೆ ಮಾನವನ ಆಟಗಳು ನಡೆಯುದಿಲ್ಲ ಅನಿಸುತ್ತೆ..... ವಿನು ಮನಸನ್ನು ಅರಿಯದೆ ಸೌಮ್ಯ ವಿನೋದ್ ಪ್ರೀತಿಯಿಂದ ದೂರಹೋಗಲು ಬಯಸುತಾಳೆ


ಕೊನೆಗೂ ನನ್ನ ಕಥಾ ನಾಯಕ ಯಾರಿಗೂ ಅರ್ಥವಾಗದ ಒಂದು ಕಲ್ಲಾಗಿ ನಿಲ್ಲುತಾನೆ.
ವಿದಿಯ ಮುಂದೆ ಯಾರು ನಿಲ್ಲಲು ಸಾಧ್ಯವಿಲ್ಲ ಅವನು ಆಡಿಸಿದಂತೆ ನಾವು ಅಡಬೇಕು
ಅದರಲ್ಲೂ ಪ್ರೀತಿ ವಿಷಯದಲ್ಲಿ ಅವನ ಪಾತ್ರ ಅಪಾರವಾದದ್ದು. 

ನನ್ನ ಕಥಾ ನಾಯಕನ ಮನಸನ್ನ ಯಾರು ಅರಿಯಲು ಪ್ರಯತ್ನವೇ ಪಡಲಿಲ್ಲ ಹೌದು ಗೆಳೆಯರೇ ವಿನೋದ್ ಸೌಮ್ಯ ಳನ್ನು ತನ್ನ ಪ್ರಾಣ ಎಂದುಕೊಂಡಿದ್ದ... 
ಅವಳ ಪ್ರೀತಿ ಒಂದಿದ್ದರೆ ನನಗೆ ಬೇರೆ ಏನು ಬೇಡ.. 
ಅವಳೇ ನನಗೆ ಸ್ನೇಹಿತೆ... 
ಅವಳ ಮಡಿಲಲಿ ನಾನು ಮಗುವಂತೆ ಇರಬೇಕು ಎಂದು ಕನಸು ಗಳನ್ನೂ ಕಂಡಿದ್ದ ವಿನು ಯಾಕೆ ಸೌಮ್ಯಳನ್ನ ದೂರ ಮಾಡಿದ್ದು ಗೊತ್ತಾ?

ಕನಸುಗಳನ್ನೇ ಜೀವನ ಎಂದು ತಿಳಿದು .... 
ಕನಸಿನಂತೆ ಸೌಮ್ಯ ಎಂದು ತಿಳಿದು ಸೌಮ್ಯಳನ್ನ ದೂರ ಮಾಡಿದನ ??
ಅಥವಾ ಸೌಮ್ಯ ಳ ಪ್ರೀತಿಯ ಭಾರವನ್ನು ಹೊರಲಾರದೆ ದೂರ ಮಾಡಿದನ ??? 
ಎಲ್ಲರ ಹಾಗೆ ವಿನೋದ್ ಪ್ರೀತಿ ಕೂಡ ಟೈಮ್ ಪಾಸ್ ????
ಸೌಮ್ಯ ಳ ಗೆಳೆತನ ವಿನೋದ್ ಪ್ರೀತಿ ಮನಸನ್ನ ಕೊಂದಿತ್ತ ??

ಇದಕ್ಕೆಲ ಸಿಕ್ಕ ಉತ್ತರ ಒಂದೇ ಗೆಳೆಯರೇ .....ಜೀವನ ಹೀಗೆ ಅಲ್ಲವೇ ನಾವು ಏನು ಆಗುವುದಿಲ್ಲವೋ ಎಂದು ಭಾವಿಸುತ್ತೇವೋ ಅಂಥಹ ಘಟನೆ ಗಳೇ ಸಂಬವಿಸುತ್ತದೆ......

ಹೌದು ಗೆಳೆಯರೇ ಆ ದೇವರ ಆಟ ಬಲ್ಲವರು ಯಾರು ??
ನನ್ನ ಕಥಾ ನಾಯಕನಿಗೆ ಮಾರಣಾಂತಿಕ ಕಾಯಿಲೆ (brain cancer ) ಕಾಡುತ್ತಿರುತ್ತದೆ.
ವಿನೋದ್ ಅಸೆ ಪಟ್ಟಂತೆ ಅವನಿಗೆ ಪವಿತ್ರ ಪ್ರೀತಿ ಕೊಟ್ಟಿದ ಆ ದೇವರು ಜೊತೆಗೆ ಆ ಕಾಯಿಲೆ ಯನ್ನು ಕೊಟ್ಟರುತ್ತಾನೆ.



ಇದರಲ್ಲಿ ಯಾರದು ತಪ್ಪು ತಿಳಿಯುತ್ತಿಲ್ಲ ಪ್ರೀತಿ ಕೊಟ್ಟಿ ಜೊತೆಗೆ ಕಾಯಿಲೇನು ಕೊಟ್ಟ ಆ ದೇವರು ನಿಜವಾಗಿಯೂ ಕ್ರೂರಿ
ಇದು ವಿನೋದ್ ಸೌಮ್ಯ ಳಿಗೆ ಮಾಡಿದ ಮೋಸವೇ ??
ಅಥವಾ ಆ ದೇವರು ವಿನೋದ್ ಗೆ ಮಾಡಿದ ಮೋಸವೇ ?
ಅಥವಾ ಇವರ ಇಬ್ಬರ ಪ್ರೀತಿ ಕಂಡ ಆ ದೇವರಿಗೆ ಅಸುಯೆಯಾಯಿತೆ ?


ಕೊನೆಗೂ ಆ ದೇವರ ಆಟ ಬಲ್ಲವರು ಯಾರು ಇಲ್ಲ ...
ಅವನ ಮುಂದೆ ಯಾರು ನಿಲ್ಲಲು ಆಗೋಲ....
ಕಲ್ಲಿನ ದೇವರಿಗೆ ಹೃದಯವೇ ಇಲ್ಲ ಅನಿಸುತ್ತೆ ...
ಎಷ್ಟೇ ಆದರೂ ಕಲ್ಲು ಅಲ್ಲವೇ ಅವನಿಗೆಲ್ಲಿ ತಿಳಿಯಬೇಕು ಪ್ರೀತಿಯ ಬೆಲೆ ಹೇಳಿ?

ಇಂದಿಗೂ ನನ್ನ ಕಥಾ ನಾಯಕ ಸೌಮ್ಯ ಜೊತೆ ಕಳೆದ ಸವಿ ನೆನಪು ಗಳನ್ನೂ ನೆನೆಯುತ್ತ ಜೀವನ ಸಾಗಿಸುತ್ತ ಇದ್ದಾನೆ ಇಲ್ಲಿಯವರೆಗೂ ಈ ಕಹಿ ಸತ್ಯ ಸೌಮ್ಯ ಳ ಗಮನಕ್ಕೆ ಬಂದಿಲ್ಲ... 
ಭವಿಷ್ಯ ಬಂದರೆ ನಾನು ಈ ಕಥೆಯನ್ನು ಮುಂದುವರೆಸಬಹುದೆ ?

ಕಲ್ಲಿನ ದೇವರಿಗೆ ಒಂದು ಪ್ರಾರ್ಥನೆ 

ಪ್ರೀತಿ ಎಲ್ಲರಿಗೂ ಕೊಡು ಕೊಟ್ಟ ಮೇಲೆ ದಯವಿಟ್ಟು ಮತ್ತೆ ಆ ಪ್ರೇಮಿ ಗಳ ಜೀವನದಲ್ಲಿ ನೀನು ಹೋಗಬೇಡ
ಅವರನ್ನು ಬಾಳಲು ಬಿಡು
ಪ್ರೀತಿ ಗೆ ಸಾವು ಕೊಟ್ಟಿಲ್ಲ ನೀನು ಆದರೆ ಪ್ರೀತಿ ಮದುವರಿಯಲು ಯಾಕೆ ಈ ಶಿಕ್ಷೆ ??

ಪ್ರೀತಿ ನು ಹೇಳದೆ ಕೊಡುವೆ ಹಾಗೆ ಸಾವನ್ನು ಹೇಳದೆ ಕೊಡುವೆ
ಪ್ರೀತಿಗೂ ಸಾವಿಗೂ ಎಷ್ಟು ನಂಟು ಇಟ್ಟೀದ್ದಿಯ ದೇವರೇ ನೀನು
ನಿನ್ನ ಕಲ್ಲು ಹೃದಯದ ಶಿಕ್ಷೆಯನ್ನು ಸಹಿಸುವ ಶಕ್ತಿ ಆ ಪ್ರೀತಿಗೆ ಕೊಟ್ಟಿದ್ಯ
ಆದರೆ ಸಾವನ್ನು ಗೆಲ್ಲುವ ಶಕ್ತಿ ಪ್ರೀತಿಗೆ ಕೊಟ್ಟಿಲ್ಲ ಯಾಕೆ

Tuesday 4 October 2011

ಸ್ನೇಹಾನ ಪ್ರೀತಿನ


ಹುಡುಗರ ಲೈಫ್  ಇಷ್ಟೇ  ಹುಡುಗಿಯರ ಲೈಫ್ ಈಗೇನೆ...!!!!  


ಹಾಯ್ ಗೆಳೆಯರೇ :
ಇದು ನನ್ನ ಮೊದಲ ಪ್ರಯತ್ನ 
೯೫ %  ಸತ್ಯ ೫ %  ಕಥೆ
ಭಾವನೆ ಗಳಿಗೆ ಬೆಲೆಯೇ ಇಲ್ಲದ ನಮ್ಮ  ಕಾಂಕ್ರೆಟ್ ಕಾಡಿನಲ್ಲಿ  ಭಾವನೆಗಳನ್ನ ಸ್ಪಂದಿಸುವ ಬಾಳ ಸಂಗತಿ ಯನ್ನು ಹುಡುಕುತ್ತಾ  ಹೊರಟ ಒಬ್ಬ ಕುರುಡನ ಜೀವನದಲ್ಲಿ ನಡೆದ   ನೈಜ ಗಟನೆ 
ಯನ್ನು ಆದರಿಸಿ ಬರೆದ ಒಂದು ಕತೆಯ ಜೊತೆಗೆ ವ್ಯಥೆ...!!! 

ಇವನ ಹೆಸರು ಆಕಾಶ್ ಹುಟ್ಟಿದ್ದು ಹಳ್ಳಿ ಯಲ್ಲಿ, ಬೆಳೆದಿದ್ದು ಓದಿದ್ದು ನಮ್ಮ ಕಾಂಕ್ರೆಟ್ ಕಾಡಿನಲ್ಲಿ., 
ಚಿಕ್ಕ ವಯ್ಯಸಿನಿಂದ ಒಂಟಿಯಾಗೆ ಬೆಳೆದ ಆಕಾಶ್  ಯಾವಾಗಲು ಒಂಟಿ ಯಾಗೆ ಇರಲು ಇಷ್ಟ ಪಡುವ ಗುಣದವನು. ವಿಧ್ಯಾಭ್ಯಾಸ ಮುಗಿಸಿ  ಜೀವನ ಸಾಗಿಸಲು  ಕೆಲಸಕ್ಕೆ ಸೇರಿ, ನನಗೆ  ಜೀವನದಲ್ಲಿ ಇಸ್ಟೇ ಸಾಕು ಬೇರೆ ಏನು ಬೇಡ ಎಂದು ನಿಟ್ಟು ಉಸಿರು ಬಿಡುತ್ತಿರುವಾಗಲೇ...!!!  ಆಕಾಶ್ ಜೀವದಲ್ಲಿ  ಒಂದು ತಂಗಾಳಿ ಯಾಗಿ ಬಂದವಳು  ಉಮಾ....!!! ಕೊನೆಗೆ ಅವಳು ಆಕಾಶ್ ಜೀವನದ ಬಿರುಗಾಳಿ ಕೂಡ ಆಗುತ್ತಾಳೆ...!!! 
 
ಒಮ್ಮೆ ಗೊದೂಳಿ ಸಮಯದಲ್ಲಿ  ಕೆಲಸ ಮುಗಿಸಿ ಮನೆಗೆ ಹೊರಡುವಾಗ  ಅವನ ಸಂಚಾರಿ ದೂರವಾಣಿಗೆ (cell phone )  ಒಂದು ಗೊತಿಲ್ಲದ  ಸಂಕೆ ಇಂದ ಒಂದು ಸಂದೇಶ ಬರುತೆ.  (Msg from unknown number).
 
ಹಿಂದಿನ ಕಾಲದಲ್ಲಿ  ನದಿ ಮೂಲ, ವ್ರುಷಿ ಮೂಲ, ಹೆಣ್ಣಿನ ಮೂಲ, ಹುಡುಕ ಬಾರದು ಎಂದು ನಮ್ಮ ಹಿರಿಯರು ಹೇಳಿದ ಮಾತು ನೆನಪಿಗೆ ಬರುತ್ತೆ., ಅದೇ ರೀತಿ ಈಗಿನ ಕಾಲದಲ್ಲಿ ಗೊತ್ತಿಲ್ಲದೇ ಬಂದ ಸಂದೇಶ ಮೂಲ, ಹಾಗು ಗೊತಿಲ್ಲದೆ ಪರಿಚಯ ವದ ಹುಡುಗಿಯ ಮೂಲ ಹುಡುಕ ಬಾರದು ಅನಿಸುತ್ತೆ.
 
ಬಹುಷಃ ಆಕಾಶ್   ಸಂದೇಶ ಮೂಲ ಹುಡುಕ ದೇ ಇದ್ದಿದ್ದರೆ ಇಂದು ನಾನು ಇಂದು ಈ ಕಥೆ ಬರೆಯಲು ಪ್ರೇರಣೆನೇ ಇರ್ತಾ ಇರಲಿಲ್ಲ ಅನಿಸ್ಸುತ್ತೆ ಗೆಳೆಯರೇ...!!!  
ಸಂದೇಶ ಮೂಲ ಹುಡುಕುತ ಹೊರಟ ಆಕಾಶ್  ಒಮ್ಮೆ ಆ ನಂಬರ್ ಗೆ  ಕರೆ ಮಾಡಿದ, ಅವನು ಮಾತನಾಡಿದ ಶೈಲಿಯನ್ನು ಕಾಲ್ಪನಿಕವಾಗಿ ಹೇಳುತ ಇದೇನೇ ಗೆಳೆಯರೇ...!!!!
ಆಕಾಶ್  :    ಹಲೋ ಯಾರು ಇದು..??   

unknw :    ನಾನು ಉಮಾ ನೀವು ಯಾರು..?? ಯಾಕೆ ಕರೆ ಮಾಡಿದ್ದೂ..??  ನನ್ನ ನಂಬರ್ ಯಾರು ಕೊಟ್ಟಿದ್ದು..?? 

ಆಕಾಶ್   :    ನಾನು ಆಕಾಶ್. ನಿಮ್ಮ ನಂಬರ್ ನಿಂದ ನನಗೆ ಸಂದೇಶ ಬಂದ ಕಾರಣ ನಾನು ಕರೆ ಮಾಡಿದ್ದು.. 

ಉಮಾ  :    ಒಹ್  ಕ್ಷಮಿಸಿ ನನ್ನ ಗೆಳತಿಗೆ ಕಳಿಸಬೇಕಾದ ಸಂದೇಶ ತಪ್ಪಾಗಿ ನಮಗೆ ಬಂದಿದೆ  ಕ್ಷಮಿಸಿ,  ಎಂದು ಉಮಾ ಫೋನ್ ಇಡುತ್ತಾಳೆ. 
ಸಾಮಾನ್ಯ ವಾಗಿ   ನಮಗೆ unknw  ನಂಬರ್ ನಿಂದ ಸಂದೇಶ ಬಂದರೆ ನಾವು ಹೀಗೆ  ಹೇಳುವುದು..!!  ಹಾಗೆ ಆಕಾಶ್ ಕೂಡ ಸುಮ್ಮನೆ ಕರೆ ಕಟ್ ಮಾಡಿ, ಅವನ ಕೆಲಸದಲ್ಲಿ ತೊಡಗು ತಾನೆ. 

ಮುಂದಿನ ದಿನ   ಉಮಾ ನಂಬರ್ ನಿಂದ ಮತ್ತೆ ಸಂದೇಶ ಬರುತ್ತೆ  ಹೀಗೆ, ಸಂದೇಶಗಳ ಮೂಲಕ  ಪರಿಚಯವಾದ ಇವರು ಒಳ್ಳೆ ಸ್ನೇಹಿತರಾಗುತ್ತಾರೆ, ಒಂದು  ದಿನ   ಆಕಾಶ್ ಗೆ  ಹುಶಾರು ಇಲ್ಲದ ಸಮದಲ್ಲಿ ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇರುತ್ತಾನೆ ಆಗ ಉಮಾ ಜೊತೆ ಮಾತಾಡಿದ ಕೆಲವು ವಾಕ್ಯಗಳು ಹೀಗೆ...!!!! 

ಉಮಾ : ಹಾಯ್ ಆಕಾಶ್  ಏನು ಮಾಡ್ತಾ ಇದ್ದೀರಾ..??  

ಆಕಾಶ್ :  ಮಲ್ಗಿದಿನಿ ಉಮಾ.  

ಉಮಾ :  ಯಾಕೆ ಏನು ಆಯಿತು ಆಕಾಶ್..??!! 

ಆಕಾಶ್ :   ಜ್ವರ ಬಂದಿದೆ. 

ಉಮಾ :  ಅವನು ಯಾಕೆ ಬಂದ ಆಕಾಶ್ ಮೇಲೆ ಹ..??? 

ಆಕಾಶ್ :  ಅಹ ಅಹ ಆ ಅವನು ನಿನ್ನ ಗೆಳೆಯ ಅಲ್ವ  ಅದಕೆ..!!  

ಉಮಾ : ಸಾಕು ಸುಮ್ನೇ ಇರೋ.   

ಆಕಾಶ್ :
ಆಯಿತು ಉಮಾವತಿ ಸುಮ್ಣನೆ ಇರ್ತೀನಿ.  

ಉಮಾ :
ಬೇಡ ಮಾತಾಡು ನನ್ನ ಜೊತೆ.  

ಆಕಾಶ್ : ಭಗವಂತ ಒಳ್ಳೆ ಲೂಸ್ ಹುಡುಗಿ ಸಹವಾಸ. 

ಉಮಾ : ಯಾಕೋ ಕೋತಿ ರಾಮ  ನನ್ನಂತ ಫ್ರೆಂಡ್ ಸಿಗೋಕೆ ನೀನು ಪುಣ್ಯ ಮಾಡಿರಬೇಕು..!! 

ಆಕಾಶ್ : ಹೌದು ಇದ್ದರು ಇರಬಹುದು, ನೀನು ಸಿಕ್ಕಿದ ಮೇಲೆ  ನನಗೆ ಗೆಳೆತನದ ಭಾವನೆ ತಿಳಿದಿದ್ದು..!!  

ಉಮಾ : ಲೋ ಯಾಕೋ ಬೇಜಾರ್ ಆಗ್ತಾ ಇದೆ ಕಣೋ. ನಿನಗೆ ಬೇಜಾರ್ ಆಗ್ತಾ ಇಲ್ವಾ. 

ಆಕಾಶ್ : ನನಗೆ ಇಲ್ಲ ಪ ನನ್ನ ಅತ್ರ ಮಾತು ಆಡೋಕೆ  ನನ್ನ್ನ ಗರ್ಲ್ ಫ್ರೆಂಡ್ ಇದಾಳೆ ಗೊತ್ತ. 

ಉಮಾ : ಹೇಯ್ ಯಾರೋ ಅದು..?? ಹೇಳಲೇ ಇಲ್ಲ ನನಗೆ..!!

ಆಕಾಶ್ : ಹುಂ  ಉಮಾ ನಾನು  ನನ್ನ ಗರ್ಲ್  ನ  ತುಂಬಾ ಪ್ರೀತಿ ಮಾಡ್ತೀನಿ.   ನನಗೆ ಅವಳು ಅವಳಿಗೆ ನಾನು
ನಮ್ಮದೇ ಅದ ಒಂದು ಪುಟ್ಟ ಲೋಕ. ನನಗೆ ಬೇಜಾರ್ ಅದಾಗ  ಅವಳ ಮಡಿಲಲಿ ಮಲ್ಕೋ ಬೇಕು, ಅವಳನ್ನ ರಾಣಿ ತರ ನೋಡಿಕೋಬೇಕು ಅನ್ನೋ ಆಸೆ ಆದರೆ ಅವಳು ಯಲ್ಲಿ ಇದ್ದಾಳೆ ಅನ್ನೋದೇ ಗೊತ್ತಿಲ್ಲ ವಲ್ಲ. 


ಉಮಾ : ಸಿಗ್ತ್ಳಲೇ ಕಣೋ  ಆಕಾಶ್ ನಿನ್ನ ಮದುವೆ ಅಗೋ  ಗರ್ಲ್ ತುಂಬಾ ಅದ್ರುಸ್ಟ ಮಾಡಿರ ಬೇಕು ಕಣೋ..!! 

ಆಕಾಶ್ :   ನೋಡೋಣ ಉಮಾ.
ಹೀಗೆ  ಆಕಾಶ್ ಉಮಾ ಸಂದೇಶದ ಮೂಲಕ ಇಬ್ಬರು ಭಾವನೆ ಗಳ ಅನ್ಚಿಕೊಳುತ್ತ  ಕೆಲವು ತಿಂಗಳು ಗಳು ಕಳೆದವು. 
ಒಂದು ದಿನ ಮತ್ತೆ ಉಮಾ ಜೊತೆಗೆ ಸಂದೇಶ ಸಂಭಾಶಣೆ ಶುರು ಮಾಡುತ್ತಾನೆ ಅದು ಹೀಗೆ..!! 

ಆಕಾಶ್  :  ಹಾಯ್  ಉಮಾ. 

ಉಮಾ : ಹೇಳು ಆಕಾಶ್. 

ಆಕಾಶ್ : ಯಾಕೋ ಉಮಾ ಬೇಜಾರ್ ಅಲ್ಲಿ ಇದ್ದೀಯ..?? 

ಉಮಾ : ಹಾಗೇನು ಇಲ್ಲ ಕಣೋ. 

ಆಕಾಶ್ :  ನನ್ನ ಮನಸು ಹೇಳ್ತಾ ಇದೆ ನೀನು ಬೇಜಾರ್ ಅಲ್ಲಿ ಇದ್ದೀಯ ಅಂತ. 

ಉಮಾ :  ಹೌದು ಕಣೋ ಸ್ವಲ್ಪ ಬೇಜಾರ್.  

ಆಕಾಶ್ :  ಯಾಕೋ ಉಮಾ ಏನು ಆಯಿತು..?? 
ಉಮಾ ಉತ್ತರಿಸದೆ ಸುಮ್ಮನೆ ಅದಲು. 

ಆಕಾಶ್ : ಸರಿ ಉಮಾ ನಾನು ಕೇಳಿದ್ದರಿಂದ ಬೇಜಾರ್ ಆಗಿದ್ರೆ ಕ್ಷಮಿಸು ಉಮಾ. 

ಉಮಾ : ಅಗೇನ್ ಇಲ್ಲ ಕಣೋ ಆಕಾಶ್.

ಉಮಾ ತಂದೆಯ ಪ್ರೀತಿ ಸಿಗದೇ ಬೆಳೆದ ಹುಡುಗಿ. ತಾಯಿಯ ಮಡಿಲಲಿ ತಾಯಿಯ ಪಾಠವನ್ನು ಕೇಳುತ ಬೆಳೆದ ಪುಟ್ಟ ಹೃದಯದಯ ಪುಟ್ಟ ಹುಡುಗಿ ಉಮಾ. ಚಿಕ್ಕ ವಯಸ್ಸಿಂದ  ನೋವು ಎಂಬ ಬೆಂಕಿ ಯನ್ನು ಸದಾ ಮನಸಲ್ಲಿ ಇಟ್ಟುಕೊಂಡು ಯಾರ ಬಳಿಯೂ  ಹೇಳದೆ  ಅವಳು ಒಬ್ಬಳೇ ಅನುಭವಿಸುತ್ತಾ ಇದ್ದಳು.  ಒಂದು ಮಾತಿನಲ್ಲಿ ಹೇಳ ಬೇಕು ಎಂದರೆ ಬೆಂಕಿಯಲಿ ಅರಳಿದ ಹೂ ಹಾಗೆ ಇವಳು.
ಉಮಾ ತನ್ನ ಯಲ್ಲ  ನೋವನ್ನು ಆಕಾಶ್ ಬಳಿ ಬೀಚಿ ಇಟ್ಟಳು. 
ಆಕಾಶ್  ಉಮಾಳ  ನೋವನ್ನು  ಕೇಳಿ ಅವಳ ಭಾವನೆ ಗಳಿಗೆ ಅಂದಿನಿಂದ ಸ್ಪಂದಿಸತೊಡಗಿದ.

    
ಹೀಗೆ ಕೆಲವು ವರ್ಷಗಳು ಕಳೆದವು ಒಬ್ಬರಿಗೆ ಒಬ್ಬರು ಭಾವನೆ ಗಳನ್ನೂ ಅನ್ಚಿಕೊಳುತ್ತ  ಇವನಿಗೆ ಅವಳು ಅವಳಿಗೆ ಇವನು ಎನ್ನುತ ಅವರ ಸ್ನೇಹ ಪ್ರೀತಿ ಯಾಗಿ ಅರಳಿತು

ಆಕಾಶ್ ಉಮಾ ನ ತನಗೆ ಗೊತಿಲ್ಲದೆ ಪ್ರೀತಿಸಲು ಆರಂಬಿಸಿದ 
ಉಮಾ ಕೂಡ ಅವಳಿಗೆ ಗೊತಿಲ್ಲದೆ ಅಗೆ ತನ್ನ ಮನಸಲ್ಲಿ ಗುಡಿ ಕಟ್ಟಿ ಪೂಗಿಸುತ್ತ ಇದ್ದಳು
 ಇಬ್ಬರು ತಮ್ಮ ಪ್ರೀತಿ ಯನ್ನು ಹೇಳಲಾರದೆ, ಪರಿತಪಿಸಿದರು. 

ಒಂದು ದಿನ  ಆಕಾಶ್ ದೈರ್ಯ ಮಾಡಿ ಇಂದು ಉಮಾ ಗೆ ನನ್ನ ಪ್ರೀತಿ ಯಾ ಬಗ್ಗೆ ಹೇಳಲೇ ಬೇಕು ಎಂದು ನಿರ್ದರಿಸಿದ. 
ಬೆಳಕ್ಕೆ ಬೇಗ ಎದ್ದು  ದೇವಸ್ತಾನಕ್ಕೆ ಹೋಗಿ ನಂತರ ಉಮಳಿಗೆ ಸಂದೇಶದ ಮೂಲಕ, ಹೀಗೆ ಹೇಳಿದ.

ಆಕಾಶ : ಹಾಯ್ ಉಮಾ ಏನು ಮಾಡ್ತಾ ಇದ್ದೀಯ..?? 

ಉಮಾ : ಆಫೀಸ್ ನಲ್ಲಿ ಕೆಲಸ ಕಣೋ ನೀನು ಏನು ಮಾಡ್ತಾ ಇದ್ದೀಯ..?? 

ಆಕಾಶ್ : ನಾನು ಆಫೀಸ್ ನಲ್ಲೆ ಇದೀನಿ ಕಣೋ. 

ಉಮಾ : ತಿಫ್ಫೇನ್ ಆಯ್ತಾ  ಕೊತಿರಾಮ..??

ಆಕಾಶ್ : ಹುಂ ಆಯಿತು ಕಣೋ ನಿಂದು ಆಯ್ತಾ..??  ಉಮಾ ನಾನು ನಿನ್ ಅತ್ರ ಮಾತಾಡ್ ಬೇಕು ಕಣೋ. ಉಮಾ : ಮಾತಾಡು ಆಕಾಶ್ 

ಆಕಾಶ್ :ನೀನು ಇಷ್ಟು ದಿನ ಕೇಳದ ಇದ್ದಲ ನಿನ್ನ ಗರ್ಲ್ ಯಾರೋ ಅಂತ ಹೇಳಲಾ ಯಾರು ಅಂತ..!!

ಉಮಾ : ಹೇಳೋ ಯಾರು ಅಂತ..!!  

ಆಕಾಶ್ :  ಅದು ಬೇರೆ ಯಾರು ಇಲ್ಲ ಕಣೋ ನೀನೆ ಅದು  ನನ್ನ ಜೀವನದ ದಾರಿ ದೀಪ ಆಗಿ ನನ್ನ ಬಾಳ ಸಂಗತಿ ಯಾಗಿ  ನನ್ನ ಉಸಿರು ಇರೋ ವರ್ಗು ನನ್ನ ಜೊತೆ ಇರ್ತ್ಯ..?? 

ಉಮಾ : ಉಮಳಿಗೆ  ಮಾತು ಬರದೆ  ಸಂತೋಷ ದಿಂದ   ಆಕಾಶ್  ಕಂಡಿತ ನಿನ್ನ ಜೊತೆಗೆ  ಇರ್ತೀನಿ ಕಣೋ. 

ಆಕಾಶ್ :  ಇ ಜಗತಲ್ಲಿ ಯಾರು ನಿನ್ನ ನನ್ನ ಅಸ್ಟು ಪ್ರೀತಿಸೋಲ್ಲ ಕಣೋ
.
ಉಮಾ : ಅದು ನನಗೆ ಗೋತು ಕಣೋ ಕೋತಿ ರಾಮ. 

 ಹೀಗೆ  ಆಕಾಶ್ ಉಮಾಳ ಪ್ರೀತಿ  ಮೊಗ್ಗಿನಿಂದ  ಅರಳಿ ಹೂ ಆಯಿತು  ಒಮ್ಮೆ   ಆಕಾಶ್  ಉಮಾ ಮೊದಲ ಬಾರಿಗೆ ಬೇಟಿ ಆಗಲು ನಿರ್ದಾರ ಮಾಡಿದರು  ಅಗೆ ಒಮ್ಮೆ ನಮ್ಮ  ಕಾಂಕ್ರೆಟ್ ಕಾಡಿನ ಹೃದಯ ಬಾಗದಲ್ಲಿ ಇರುವ  ಉದ್ಯಾನವನ  ದಲ್ಲಿ  ಮೊದಲ ಬಾರಿಗೆ ಬೇಟಿ ಮಾಡಿದರು.
ಆಕಾಶ್  ನನ್ನ ಜೀವದ ಗೆಳತಿ ನೋಡೋಲು ಆತುರ ದಿಂದ ಬಂದು  ಉಮಾಳನ್ನು  ಹುಡುಗಿ ಯಂತೆ ನಾಚಿಕೆ ನಗುತ ನೋಡಿ  ಮುಗುಳು ನಗೆ ಬಿರಿದನನು.

ಉಮಾ ಕೂಡ ಆಕಾಶ್ ಅನ್ನು ನೋಡಿ  ನಾಚಿಕೆ ಇಂದ ನೀರಾಗಿ  ಮುಗುಳು ನಗೆ ಬಿರಿದಳು  ನಿಜವಾಗಿಯೂ 
ಹ ದಿನ ಇಬ್ಬರಿಗೂ ಮರೆಯ ಲಾಗದ ದಿನ ವಾಯಿತು. 

ಉಮಾ : ಹೇಯ್ ಕೋತಿ ರಾಮ ಯಾಕೋ ಲೇಟ್ ಹ..?? 

ಆಕಾಶ್ :  ಟ್ರಾಫಿಕ್  ಇತ್ತು ಕಣೋ.
 
ಉಮಾ : ಹೋಗಲಿ ಬಿಡು ಹೇಗಿದ್ದೀಯ.? 

ಆಕಾಶ್  : ಚಂದ ಇದೀನಿ ನೀನು. 

ಉಮಾ : ನಾನು ಚನಗೆ ಇದೀನಿ ಕಣೋ. 

ಆಕಾಶ್ :  ಏನೇ ಮೊದಲೇ ಬಾರಿಗೆ  ಹುಡುಗನ ನೋಡೋಕೆ ಬರ್ತಾ ಇದ್ದೀಯ ಏನು ಆದರು ತರಬೇಕು ಅನಿಸಿಲ್ವ ನಿನಗೆ ಹ..?? 

ಉಮಾ :  ನಾನು ನಿನ್ನ ತಾರಾ ಜುಗ್ಗ  ಅಲ್ಲ ಎಂದು ಹೇಳಿ ತನ್ನ ಬ್ಯಾಗ್ ನಲ್ಲಿ ಪ್ರೀತಿ ಇಂದ ತಂದ ಇದ್ದ  ಸ್ವೀಟ್ ದುದ್ ಪೇಡ  ನ ಕೊಟ್ಟಳು
ನಿಜ ಹೇಳ ಬೇಕು ಎಂದರೆ ಉಮಾಳ ಪ್ರೀತಿ ಎಷ್ಟು ಅಂದರೆ ಅವಳ ಪ್ರೀತಿ ಜಾಸ್ತಿ ಆಗಿ ಪೇಡ ಗೆ ಇರುವೆ ಬಂದಿತ್ತು. 

ಆಕಾಶ್  ಉಮಾ ಇಬ್ಬರು ಪೇಡ ತಿಂದು  ಕುಳಿತರು  ಸ್ವಲ್ಪ ಸಮಯದ ನಂತರ  ಇಬ್ಬರು ಹೊರಡಲು ಸಿದ್ದರಾಗಿ  ಒಬ್ಬರನ್ನು ಒಬ್ಬರು ನೋಡಿ  ಶೇಕ್  ಹ್ಯಾಂಡ್ ಕೊಟ್ಟಿ. ಉಮಾ ಬರುವೆಯ ಎಂದಳು  ನಿಜವಾಗಿಯೂ ಉಮಾಳ  ಹ ಮೊದಲ ನೋಟ  ವನ್ನು ಮರೆಯಲು ಸದ್ಯ ಇಲ್ಲ. 
 
ಹೀಗೆ ಇಬ್ಬರು  ಸಮಯ ಸಿಕ್ಕಾಗೆಲ   ಭೇಟಿ ಮಾಡುತಿದ್ದರು  ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟು  ಇರಲಾರದ ದಷ್ಟು ಪ್ರೀತಿಸಿದರು.  ಉಮಾ  ಒಮ್ಮೆ  ನೀನು ನನ್ನ ಪ್ರಾಣ ಎನ್ನುತ ಇದ್ದಳು  ಇವಳಿಗೆ ಅವನು ಅವನಿಗೆ ಇವಳು  ಸುಂದರ ವಾಗಿ ಅರಳಿತು ಇವರ ಪ್ರೀತಿ.

ಒಮ್ಮೆ  ಆಕಾಶ್ ಉಮಾ ಇಬ್ಬರು ಬೇಟಿ ಅದಾಗ  ಗೆಳೆಯರ ಬಗ್ಗೆ ಮಾತನಾಡುತಿರುವಾಗ  ಉಮಾಳ  ಆಪ್ತ ಗೆಳೆಯನಾದ ಅರುಣ್  ಬಗ್ಗೆ ಹೇಳಿದಳು ಆಕಾಶ್ ಅರುಣ್ ನನ್ನ ಆಪ್ತ ಗೆಳೆಯ ನಾನು ಇವನ ಬಳಿ ಕೊನೆಯವರೆಗೂ ನಮ್ಮ ಸ್ನೇಹ ಇಗೆ ಇರುತೆ  ಇದಕ್ಕೆ ನಿನ್ನ ಸಮ್ಮತಿ ಬೇಕು ಎಂದು ಹೇಳಿದಳು. ಆಕಾಶ್  ಮೊದಲೇ ಈ ವಿಷಯ ತಿಳಿದಿದ್ದರಿಂದ  

ನಿನ್ನ ಆಸೆಯೇ ನನ್ನ ಆಸೆ ಎಂದು ತಿಳಿದು, ಹು ಎಂದು  ಹೇಳಿದನು. 
ಹೀಗೆ ಸುಂದರವಾಗಿದ್ದ ಇವರ ಪ್ರೇಮದ ಜೀವನ ನೋಡಿ ಆ ವಿಧಿಗೆ ಹೊಟ್ಟೆ ಕಿಚ್ಚು ಬಂತು ಅನ್ನಿಸುತೆ,  ಒಮ್ಮೆ ಇವರ ಮದ್ಯ ಆ ವಿಧಿ ಬಿರುಗಾಳಿ ಬೀಸಿ ಬಿಟ್ಟಿತು.

ಎಲ್ಲರ ಪ್ರೀತಿ ಯಲ್ಲೂ ಸ್ವಾರ್ತ  ಇದ್ದೆ ಇರುತ್ತೆ, ಸ್ವಾರ್ತ ಇಲ್ಲದೇ ದಿದ್ದರೆ ಪ್ರೀತಿ ಸಿಗದು ಸ್ವಾರ್ತ ಅತಿ ಆದರೆ ಪ್ರೀತಿಯು ಕೈ ತಪ್ಪಿ ಹೋಗುತ್ತೆ, ಅನ್ನೋದಿಕ್ಕೆ ಒಂದು ದಿನ ನಡೆದ ಈ ಗಟನೆಯೇ ಕಾರಣ. 

ಒಮ್ಮೆ  ಆಕಾಶ್  ಉಮಳನ್ನ ಭೇಟಿ ಮಾಡಿ ಅಂದು  ಉಮಳಿಗೆ ಇಷ್ಟವಾದ  ಹೂ ಅನ್ನು ಉಮಳಿಗೆ ಕೊಟ್ಟ. 

ಆಕಾಶ್ : ಉಮಾ ನೀನು ನನ್ನ ನಿಜವಾಗಿಯೂ ಪ್ರೀತಿಸ್ತ ಇದ್ದೀಯ..??

ಉಮಾ : ಉಮಾ ಕಣ್ಣಲಿ ತಟ್ಟನೆ ನಿರು ಬಂದು ಯಾಕೋ ನೀನು ಇ ರೀತಿ ಕೇಳುತ ಇದ್ದೀಯ..?? ಪ್ರೀತಿ ಮಾಡದೇ ನಾನು ನಿನ್ನ ಜೊತೆ ಎಷ್ಟು ವರ್ಷ ಇದೀನ ಹೇಳು ನೀನು ನನ್ನ ಪ್ರಾಣ ಕಣೋ.

ಆಕಾಶ : ಹುಂ ಕಣೋ ಅದು ನನಗೆ ಚನ್ನಗೆ ಗೊತ್ತು ಉಮಾ, ನೀನು ನನಗೆ ಎಂದು  ಆದರೆ ನನಗಾಗಿ ಒಂದು ಮಾತು ನಡೆಸಿ ಕೊಡುವೆಯ..??

ಉಮಾ : ಹುಂ ಆಕಾಶ್ ಏನು ಹೇಳು ನಾನು ಮಾಡ್ತೀನಿ.

ಆಕಾಶ್ : ನಿನಗೆ ನನ್ನ ಪ್ರೀತಿ ಬೇಕು ಎಂದರೆ ನೀನು ನಿನ್ನ ಸ್ನೇಹವನ್ನು ಬಿಡ  ಬೇಕು ಎಂದ.
 
ಉಮಾ : ಆಕಾಶ್ ಇಂದ ಇ ಮಾತು ಅನ್ನು ಕೇಳಿ ಒಂದು ನಿಮಿಷ  ಏನು ಮಾತುಆಡದೇ  ಏನು ಕರಣ ಏನು ಕೇಳಿದಳು..??

ಆಕಾಶ್ :  ಆತುರ ದಿಂದ ಸ್ವಾರ್ತನೆ ಕಾರಣ ಎಂದು ಹೇಳಿದ,  ನೀನು ಬಿಡಲೇ ಬೇಕು ಇಲ್ಲ ನನ್ನನ್ನೇ ಬಿಟ್ಟುಬಿಡು ಎಂದ. 

ಉಮಾ :  ಆಕಾಶ್ ಇಂದ ಇ ಮಾತು ಅನ್ನು ಕೇಳಿ ಉಮಾಳ ಹೃದಯ ಒಮ್ಮೆ ನಿಂತು ಬಿಟ್ಟಿತೇನೋ ಅನಿಸಿ ಬಿಟ್ಟಿತು  ಉಮಳಿಗೆ ಏನು ತೊಚಲರದೆ ಮೌನ ಗೌರಿ ಯಂತ್ ಮೌನ ವಾದಳು.

ಉಮಾ ಆಕಾಶ್ ಯಾಕೆ ಹೀಗೆ ಹೇಳುತಾನೆ ಎಂದು ಯೋಚಿಸದೆ ನನಗೆ ನೀನು ಒಂದು ಕಣ್ಣು, ಸ್ನೇಹ ಒಂದು ಕಣ್ಣು ಹೇಗೆ ಬಿಡಲಿ  ನನಗೆ ಎರುಡು ಕಣ್ಣು ಗಳು ಬೇಕು ಎಂದಳು ಉಮಾ ಯೋಚಿಸದೆ ಕೋಪ ದಿಂದ  ನನಗೆ ಎರುಡು ಕಣ್ಣು ಗಳು ಬೇಕೇ ಬೇಕು ಬಿಡಲು ಸದ್ಯ ಇಲ್ಲ  ನೀನು ಸಂತೋಷ ವಾಗಿ ಇರುವೆ ಎನ್ನುವ ದ್ದಾರೆ  ನನ್ನ ಅನ್ನು ಬಿಟ್ಟುಬಿಡು ಎಂದಳು.

ಉಮಾನೆ ಜೀವನೆ ಎಂದು ಕೊಡ  ಆಕಾಶ್ ಉಮಾ ಳಿಂದ ಬಂದ ಮಾತುಗಳ ಬಾಣ ಗಳು ಆಕಾಶ್ ಹೃದಯವನ್ನು ಚುಚಿದವು. 
ಆಕಾಶ್ ಕೊನೆಗೆ ಕಣ್ಣು ಒದರೆ ಇರಬವುದು ಹೃದಯ ಒದರೆ  ಇರಲಾಗದು ಎಂದು   ನೆಲಕ್ಕೆ ಉರಳಿ ತನ್ನ ಉಸಿರು ಬಿಗಿ ಇಡಿದು ಕಣ್ಣು ಮುಚ್ಧಿದನು. 

ಕೊನೆಯದಾಗಿ ಇಲ್ಲಿ ಯಾರು ಯಾರನ್ನ ಬಿಟ್ಟು ಕೊಟ್ಟರು  ಪ್ರೀತಿ ಗೆ ಸಾವಿಲ್ಲ ಅಂತಾರೆ  ಅವನ ಪ್ರೀತಿಯೇ ಅವನ ಹೃದಯ ವನ್ನು ಹೊಡೆದು ಅಕಿತು ?

ಸ್ನೇಹ ಅಮರ ಅಂತಾರೆ ಆದರೆ ಆಕಾಶ್ ಜೇವನದಲ್ಲಿ  ಸ್ನೇಹ ಅವನ ಮರಣ ಆಯಿತು  ?

ಚಿಕ್ಕವನಿಂದ ಒಂಟಿಯಾಗಿ ಬೆಳೆದ ಆಕಾಶ್ ಗೆ ಸ್ನೇಹ ದ ಬೆಲೆ ಗೊತ್ತಿಲದೇ ಇಗೆ  ಆತುರ ಪಟ್ಟನ  ?

ಅಥವಾ ತಂದೆ ಪ್ರೀತಿ ಸಿಗದೇ ಬೆಳೆದ ಉಮಾ ಪ್ರೀತಿಯ  ಬೆಲೆ ಗೊತ್ತಿಲದೇ ಆತುರ ಪಟ್ಟಳ?

 ಸ್ನೇಹ ಜೀವನದ ಒಂದು ಭಾಗ, ಪೂರ್ತಿ ಜೀವನ ಅಲ್ಲ. ಪ್ರೀತಿ ನು ಸಹ ಜೀವನದ ಒಂದು ಭಾಗನೇ ಪ್ರೀತಿನೆ ಜೀವನ ಅಲ್ಲ.

ಕೊನೆಗೂ ನನಗೆ ತಿಳಿಯುತ್ತಿಲ್ಲ ಇಲ್ಲಿ ಕೊನೆಗೆ ಯಾವುದು ತನ್ನ ಗುರಿಯನ್ನು ಮುಟ್ಟಿತು ಎಂದು ?

 ಸ್ನೇಹಾನ ಪ್ರೀತಿ ನ ಅಂತ